ಮುಂಬೈ ರಿನೈಸಾನ್ಸ್ ಹೋಟೆಲ್ ಮುಂದೆ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ!: ಅತೃಪ್ತರು ಕಂಗಾಲು!
ನ್ಯೂಸ್ ಕನ್ನಡ ವರದಿ: ಮುಂಬೈ ರಿನೈಸಾನ್ಸ್ ಹೋಟೆಲ್ ಮುಂದೆ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ: ಅತೃಪ್ತರು ಕಂಗಾಲು
ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೈತ್ರಿ ಸರ್ಕಾರದ ಪರ ವಿಶ್ವಾಸಮತಯಾಚನೆ ಮಾಡದೆ ಹೋಟೆಲ್ ನಲ್ಲೆ ಉಳಿದಿರುವ ೧೫ ಜನ ಅತೃಪ್ತ ಶಾಸಕರ ನಡೆಯನ್ನು ಖಂಡಿಸಿ, ಮಹಾರಾಷ್ಟ್ರ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಹೋಟೆಲ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.ಇಂದು ಮಧ್ಯಾಹ್ನ ಸಾವಿರಾರು ಮಂದಿ ಕಾರ್ಯಕರ್ತರು ಹೋಟೆಲ್ ಮುಂಭಾಗ ಜಮಾಯಿಸಿ, ಅತೃಪ್ತ ಶಾಸಕರ ವಿರುದ್ಧ ಹಾಗೂ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಮತ್ತು ಅತೃಪ್ತ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು.